ಬಿದರಹಳ್ಳಿಯಲ್ಲಿ ಮನೆಗಳ್ಳತನ ಮಾಡಿ ಕದ್ದ ಮಾಲು ಸಮೇತ ಸಿಕ್ಕಿಬಿದ್ದ ಆರೋಪಿಗಳು

ರಿಪ್ಪನ್ ಪೇಟೆ : ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ಬಿದರಹಳ್ಳಿ ಗ್ರಾಮದಲ್ಲಿ ಕಳೆದ ಪೆಬ್ರವರಿ ತಿಂಗಳಿನಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣದ ಒಂದರಲ್ಲಿ ಆರೋಪಿಗಳನ್ನು ರಿಪ್ಪನ್ ಪೇಟೆಯ ಪಿಎಸೈ ಪ್ರವೀಣ್ ಎಸ್ ಪಿ ನೇತ್ರತ್ವದ ಸಿಬ್ಬಂದಿಗಳು ಆರೋಪಿಗಳನ್ನು ಬಂಧಿಸುವ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದಾರೆ.

ಬಿದರಹಳ್ಳಿ ಸಮೀಪದ ಮಂಡ್ಲಿ ಗ್ರಾಮದ ಪುರೋಹಿತ ವೃತ್ತಿ ಮಾಡುವ ಸ್ವಾಮಿ ಹಾಗೂ ಕುಟುಂಬಸ್ಥರು ಫೆಬ್ರವರಿ 15 ರಂದು ಹಾವೇರಿ ಜಿಲ್ಲೆಯ ದೇವಸ್ಥಾನಕ್ಕೆ ತೆರಳಿ ಹಿಂದಿರುಗಿದಾಗ ಮನೆಯ ಹಿತ್ತಲ ಬಾಗಿಲನ್ನು ಬಾಗಿಲು ಮುರಿದು ಹೊಳಹಕ್ಕಿ ಬೆಡ್ ರೂಮ್ ನಲ್ಲಿದ್ದ ಗಾಡ್ರೇಜ್ ಮುರಿದು (ಒಂದು ಲಕ್ಷದ ಐದು ಸಾವಿರ) ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕಳ್ಳತನ ಮಾಡಲಾಗಿತ್ತು, ಈ ಬಗ್ಗೆ ರಿಪ್ಪನ್ ಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆ ಕೈಗೊಂಡ ರಿಪ್ಪನ್ ಪೇಟೆ ಪೊಲೀಸರು ಶಿವಮೊಗ್ಗ ಜಿಲ್ಲೆಯ ನಿವಾಸಿಗಳಾದ ಖಲೀಲ್ ಖಾನ್ , ಅಬ್ದುಲ್ ಶಫೀಕ್ , ಸೈಯದ್ ಜಾವೀದ್ ರವರನ್ನು ಬಂಧಿಸಿ ಕದ್ದ ಬೆಲೆಬಾಳುವ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಮೇಶ್ , ಸಂತೋಷ್ ಕೊರವರ , ರಾಮಚಂದ್ರ ಹಾಗೂ ಮಧುಸೂಧನ್ ಇದ್ದರು.

 

  • Related Posts

    ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????

    ಆಗುಂಬೆ ಪ್ರದೇಶವು ಸುಂದರ ಹಾಗೂ ಪ್ರವಾಸಿಗರ ತಾಣವಾಗಿದ್ದು ಆ ಬೆಟ್ಟವನ್ನು ವೀಕ್ಷಣೆ ಮಾಡಲು ತುಂಬಾ ಊರುಗಳಿಂದ ಜನರು ಬರುತ್ತಾರೆ ಕುಂದಾದ್ರಿ ಬೆಟ್ಟದ ಮೇಲಿನ‌ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ದೇಹವೊಂದು ಪತ್ತೆಯಾಗಿರುವುದಾಗಿ ಕಂಡು ಬಂದಿದೆ. ಸೋಮವಾರ ರಾತ್ರಿ ಟ್ರಕ್ಕಿಂಗ್ ಅಂತ…

    Continue reading
    ಆಲ್ದುರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

    ಇಂದು 134ನೇ ಅಂಬೇಡ್ಕರ್ ಜಯಂತಿ ಪ್ರಯುಕ್ತ ಆಲ್ದುರು ಬ್ಲಾಕ್ ಕಾಂಗ್ರೆಸ್ ಮತ್ತು ಯುವ ಕಾಂಗ್ರೆಸ್ ವತಿಯಿಂದ ಆಲ್ದುರಿನಲ್ಲಿ ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡುವ ಮುಖಾಂತರ ಅರ್ಥಪೂರ್ಣವಾಗಿ ಆಚರಿಸಲಾಯಿತು ಈ ಸಂಧರ್ಭದಲ್ಲಿ ಆಲ್ದುರು ಬ್ಲಾಕ್ ಅಧ್ಯಕ್ಷರಾದ ಮೊಹಮ್ಮದ್ ಮುದ್ದಾಬೀರ್, ಅಲ್ದುರು ಬ್ಲಾಕ್ ಯುವ…

    Continue reading

    You Missed

    ಕುಂದಾದ್ರಿ ಬೆಟ್ಟದ ಮೇಲೆ ನಡೆದಿದ್ದೇನು ಹಾಗಾದರೆ ಸುಟ್ಟ ಶವ ರೀತಿ ಪತ್ತೆಯಾದವರು ಯಾರು????

    ಆಲ್ದುರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಅಂಬೇಡ್ಕರ್ ಜಯಂತಿ ಆಚರಣೆ

    ಭೀಕರ ಅಪಘಾತ

    ಬ್ರೇಕಿಂಗ್ ನ್ಯೂಸ್

    ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ 26ನೇ ವರ್ಷದ ಅದ್ದೂರಿ ವಾರ್ಷಿಕೋತ್ಸವ

    ಪ್ರತಿಭಟನೆ: ಬೆಲೆ ಏರಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ