ರೈತರಿಗೆ ಹೊಸನಗರ ತಹಶೀಲ್ದಾರರಿಂದ ಅನ್ಯಾಯ?

ಓರ್ವ ರೈತನಿಗೆ ತಹಶೀಲ್ದಾರರಿಂದ ಅನ್ಯಾಯ,?

ವಸವೆ ಗ್ರಾಮ, ಮೇಲಿನ ಬೆಸುಗೆ ಗ್ರಾಮ ಪಂಚಾಯಿತಿ ಹುಂಚ ಹೋಬಳಿ ಹೊಸನಗರ ತಾಲೂಕು ಶಿವಮೊಗ್ಗ ಜಿಲ್ಲೆ.

ವಸವೆ  ಗ್ರಾಮದಲ್ಲಿ ವಾಸವಾಗಿರುವಂತಹ ಶ್ರೀಧರ್ ಎಂಬ ರೈತ ಕುಟುಂಬಕ್ಕೆ ಅನ್ಯಾಯ ಆಗಿರುವ ಬಗ್ಗೆ ಏನಿದು ವಿಚಾರ?

ಸುಮಾರು ವರ್ಷಗಳಿಂದ ಉಳಿಮೆ ಮಾಡಿಕೊಂಡು ಬಂದಿರುವಂತಹ ಶ್ರೀಧರ್ ಕುಟುಂಬ ಇದೀಗ ತಹಶೀಲ್ದಾರ್ ಆಫೀಸ್ ಎದುರುಗಡೆ ನೆನ್ನೆಯಿಂದ ಉಪವಾಸ ಸತ್ಯಾಗ್ರಹ ಹಲವಾರು ರೈತರು ಸೇರಿ ಮಾಡುತ್ತಿದ್ದು ಇದಕ್ಕೆ ನ್ಯಾಯ ಸಿಗಬೇಕೆಂದು ಎಲ್ಲರೂ ಕೂಡ ಧರಣಿಯಲ್ಲಿ ಕುಳಿತಿದ್ದಾರೆ ಹಾಗಾದರೆ ಏನಿದು ವಿಚಾರ?

ದಿನಾಂಕ 28 5 2025 ರಂದು ತಹಶೀಲ್ದಾರ್ ಅವರು ಏಕಾಏಕಿ ಯಾವುದೇ ನೋಟಿಸ್ ಕೊಡದೆ ಸುಮಾರು ಎಂಟು ಹತ್ತು ವರ್ಷಗಳಿಂದ ಅಡಿಕೆ ಗಿಡಗಳನ್ನು ನೆಟ್ಟಿದ್ದು ಇದೀಗ ಫಲ ಬರುವ ಸಮಯದಲ್ಲಿ ಏಕಾಏಕಿ ಬಂದು ಗಿಡಗಳನ್ನು ಕಡಿದು ನಾಶ ಮಾಡಿದ್ದಾರೆ ಹಾಗೂ ಅವರ ಮನೆಯಲ್ಲಿರುವಂತಹ ರೈತನ ಪೀಠೋಪಕರಣಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಶ್ರೀಧರ್ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ? ಏಕಾಏಕಿ ಅಡಿಕೆ  ಗಿಡಗಳನ್ನು ಕಡಿಸಲು ಕಾರಣವೇನು?

ತದನಂತರದಲ್ಲಿ ಪೊಲೀಸ್ ಸ್ಟೇಷನ್ನಲ್ಲಿ ಕಂಪ್ಲೇಂಟ್ ಆಗಿದ್ದು, ಯಾವುದೇ ಡಿಸಿ ಕೋರ್ಟಿನಿಂದ ತೀರ್ಮಾನ ಆಗಿಲ್ಲ ಏಕಾಏಕಿ ಬಂದು ಜೆಸಿಪಿಯನ್ನು ತೆಗೆದುಕೊಂಡು ಬಂದು ಗಿಡಗಳನ್ನು ಸರ್ವನಾಶ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾರೆ… ಯಾರು ಅರ್ಜಿ ಕೊಟ್ಟಿದ್ದಾರೆ ಅವರದು ಕೂಡ ಒತ್ತುವರಿ ಜಾಗ ಇದೆ ಎಂದು ರೈತ ಹೇಳಿಕೊಂಡಿದ್ದಾರೆ

ಮನೆಯಲ್ಲಿರುವಂತಹ ಕಳೆ ಹೊಡೆಯುವ ಮಷೀನ್ ಟೈಲರಿಂಗ್ ಮಷೀನ್ ಇನ್ನು ಇತ್ಯಾದಿ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ರೈತರ ಆರೋಪಿಸಿದ್ದಾರೆ.

ಸುಮಾರು 1600 ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾರೆ ಎಂದು ರೈತ ಆರೋಪಿಸಿದ್ದಾರೆ ಹಾಗಾದರೆ ನಮ್ಮಂತ ರೈತರಿಗೆ ನ್ಯಾಯ ಇಲ್ಲವೇ ಇದೇನಿದು ದೌರ್ಜನ್ಯ ಎಂದು ಅವರು ಪ್ರಶ್ನೆ ಮಾಡಿದ್ದಾರೆ?

ನೆನ್ನೆಯಿಂದ ಇದಕ್ಕೆ ಸಂಬಂಧಪಟ್ಟ ಯಾವ ಅಧಿಕಾರಿಗಳು ಬಂದಿಲ್ಲ… ಇದಕ್ಕೆ ಸಂಬಂಧಿಸಿದಂತೆ ತಹಶೀಲ್ದಾರ್ ಕೂಡ ಈಗ ಏನು ಮಾತನಾಡದೆ ಅವರ ಪಾಡಿಗೆ ಅವರ ಕೆಲಸ ಮಾಡಿಕೊಂಡಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ?

 

ಇದಕ್ಕೆ ಸಂಬಂಧಪಟ್ಟಂತಹ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಬೇಕು.

ರೈತರಿಗೆ ಆಗಿರುವ ನಷ್ಟದ ಬಗ್ಗೆ ನ್ಯಾಯ ಕೊಡಿಸಬೇಕೆಂದು ರೈತರು ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ…. ಇನ್ನು ಕೂಡ ಯಾವುದೇ ರೀತಿಯ ಅಧಿಕಾರಿಗಳಿಂದ ಯಾವುದೇ ಉತ್ತರ ದೊರಕಿಲ್ಲ ಎಂದು ರೈತ ಆರೋಪಿಸಿದ್ದಾರೆ?

 

 

 

 

 

 

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ತೀರ್ಥಹಳ್ಳಿ ಸೀಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ – ತಾಲೂಕಿಗೆ ಮಾದರಿ!   ತೀರ್ಥಹಳ್ಳಿ ತಾಲೂಕಿನ ಸೀಬಿನಕೆರೆ ಸರ್ಕಾರಿ ಶಾಲೆ ಇದೀಗ ತಾಲೂಕಿಗೆ ಮಾದರಿಯಾಗುತ್ತಿದೆ. ಅನುದಾನ ರಹಿತ ಶಾಲೆಗಳ ನಡುವೆ ಸೀಬಿನಕೆರೆ ಶಾಲೆ ತನ್ನ ವಿಶಿಷ್ಟ ಕಾರ್ಯಚಟುವಟಿಕೆಗಳ ಮೂಲಕ ಎಲ್ಲರ ಗಮನ…

    Continue reading
    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್ ಹೇಳಿಕೆ ಏನು?

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದ ರಿಯಲ್ ಎಸ್ಟೇಟ್ ವಹಿವಾಟುಗಳ ಪಾರದರ್ಶಕತೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ ಸಾಮಾಜಿಕ ಹೋರಾಟಗಾರ ರಾಘವೇಂದ್ರ ಕಂಡಿಲ್, ಪಟ್ಟಣ ಪಂಚಾಯಿತಿ ಅಧಿಕಾರಿಗಳಿಂದ ವಿವರಣೆ ಕೋರಿದ್ದಾರೆ. ರಾತ್ರೋರಾತ್ರಿ ಕಾಂಕ್ರೀಟ್ ರಸ್ತೆ ನಿರ್ಮಾಣ ಹಾಗೂ ಮೂರು ಕೋಟಿ ರೂಪಾಯಿ ಮೌಲ್ಯದ…

    Continue reading

    You Missed

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ಸಿಬಿನಕೆರೆ ಶಾಲೆ ಅದ್ದೂರಿ ಮಕ್ಕಳ ಸಂತೆ ತಾಲೂಕಿಗೆ ಮಾದರಿ – ತೀರ್ಥಹಳ್ಳಿ ತೀರ್ಥಹಳ್ಳಿ

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್ ಹೇಳಿಕೆ ಏನು?

    ತೀರ್ಥಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಉದ್ಭವಿಸಿರುವ ರಿಯಲ್ ಎಸ್ಟೇಟ್ ಹಗರಣ ಈ ಬಗ್ಗೆ ರಾಘವೇಂದ್ರ ಕಂಡಿಲ್  ಹೇಳಿಕೆ ಏನು?

    ಸರ್ವಧರ್ಮ ಸೌಹಾರ್ದ ಟ್ರಸ್ಟ್ (ರೀ) ಹೊಸನಗರ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

    ಸರ್ವಧರ್ಮ ಸೌಹಾರ್ದ ಟ್ರಸ್ಟ್ (ರೀ) ಹೊಸನಗರ ಎರಡನೇ ವರ್ಷದ ವಾರ್ಷಿಕೋತ್ಸವ ಸಮಾರಂಭ

    ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ

    ಕರ್ನಾಟಕ ಕಾರ್ಯ ನಿರತರ ಪತ್ರಕರ್ತರ ಧ್ವನಿ (ರೀ ) ರಾಜ್ಯಮಟ್ಟದ ಪತ್ರಕರ್ತರ ಸಂಕಿರಣ ಮತ್ತು ರಾಜ್ಯ ಪ್ರಶಸ್ತಿ ಪ್ರಧಾನ ಸಮಾರಂಭ

    ರಿಪ್ಪನ್ ಪೇಟೆಯ ಸೂಡರು ಬಳಿ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಂಭವಿಸಿದೆ.

    ರಿಪ್ಪನ್ ಪೇಟೆಯ ಸೂಡರು  ಬಳಿ ಖಾಸಗಿ ಬಸ್ಸಿಗೆ ಬೆಂಕಿ ಹತ್ತಿಕೊಂಡಿರುವ ಘಟನೆ ಸಂಭವಿಸಿದೆ.

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ