ಆರೋಗ್ಯ ರಕ್ಷಾ ಕವಚ ತುರ್ತು ವೈದ್ಯಕೀಯ ತಂತ್ರಜ್ಞಾನರಾದ ಅಮಿತ್ ಕುಮಾರ್ ಅವರಿಗೆ ಶ್ರೇಷ್ಠ ತುತ್ತು ಸೇವಾ ಪ್ರಶಸ್ತಿ
ನರ್ಸಿಂಗ್ ಅಧಿಕಾರಿಯಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಅಮಿತ್ ಅವರ ಸೇವೆ!
ಅಮಿತ್ ಕುಮಾರ್ ಟಿ ಎಸ್, ಬೆಟ್ಟಮಕ್ಕಿ ನ್ಯೂ ಕಾಲೋನಿ. ಸೀಬಿನಕೆರೆ. ತೀರ್ಥಹಳ್ಳಿ. ಕಳೆದ 15 ವರ್ಷಗಳಿಂದ ಆರೋಗ್ಯ ಇಲಾಖೆಯಲ್ಲಿ ಸೇವೆ ಕ್ಷೇತ್ರದಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡು 7 ವರ್ಷ ಮಂಗಳೂರಿನ ಮೂಡುಬಿದ್ರಿಯಲ್ಲಿ 1 ವರ್ಷ ಹೊಸನಗರ, 1 ವರ್ಷ ಹುಂಚ, ಈಗ ಸುಮಾರು 8 ವರ್ಷಗಳಿಂದ ತೀರ್ಥಹಳ್ಳಿಯ ಜೆಸಿ ಹಾಸ್ಪಿಟಲ್ ನಲ್ಲಿ ಆರೋಗ್ಯ ಕವಚದಲ್ಲಿ ತುರ್ತು ವೈದ್ಯಕೀಯ ತಂತ್ರಜ್ಞ ವಿಭಾಗದಲ್ಲಿ (ನರ್ಸಿಂಗ್ ಅಧಿಕಾರಿಯಾಗಿ ) ಯಶಸ್ವಿ ಕಾರ್ಯ ನಿರ್ವಹಿಸುತಿದ್ದು ಸಾವಿರಾರು ಜನರ ಜೀವ ಕಾಪಾಡಿದ್ದಾರೆ. ಇವರು ಸುಮಾರು ಸರಾಸರಿ 90ಕ್ಕೂ ಹೆಚ್ಚು ಹೆರಿಗೆಗಳನ್ನು ಆಂಬುಲೆನ್ಸ್ ನಲ್ಲಿ ಮಾಡ್ಸಿದ್ದು. ಹಲವಾರು ಪ್ರಶಸ್ತಿಗಳು ಇವನು ಸಲ್ಲಿಸುವ ಸೇವೆಗೆ ಬೆನ್ನೆತ್ತು ಬಂದಿದೆ ಇವರ ಸೇವಾ ಮನೋಭಾವದಿಂದ ಕೆಲಸ ನಿರ್ವಹಿಸಿದ ಎಲ್ಲಾ ಕ್ಷೇತ್ರಗಳಲ್ಲಿಯೂ. ಮನೆ ಮಗ ಎಂದು ಪ್ರಸಿದ್ದಿ ಪಡೆದಿದ್ದಾರೆ.