ರಿಪ್ಪನ್ ಪೇಟೆ : ರಾಜ್ಯದಲ್ಲಿ ಈಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ದಿಡೀರನೆ ವಿದ್ಯುತ್ ದರ, ಹಾಲಿನ ದರವನ್ನು ಹೆಚ್ಚಿಸಿದೆ
ಪ್ರತಿ ಮನೆಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ಕೊಡುವುದಾಗಿ ಭರವಸೆ ನೀಡಿದ್ದ ಸರ್ಕಾರ, ಈಗ ದರ (Power Price) ಏರಿಕೆ ಮಾಡಿದೆ. ಇದು ಖಂಡನೀಯ ಮತ್ತು ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯಿಂದ ಜೀವನ ನಡೆಸಲು ಕಷ್ಟವಾಗುತ್ತಿದೆ ಎಂದು ರಿಪ್ಪನ್ ಪೇಟೆಯ ಬಿಜೆಪಿ ನಾಯಕರು ಪ್ರತಿಭಟನೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಸುಧೀಂದ್ರ ಪೂಜಾರಿ, ಸತೀಶ್, ಯೋಗೇಂದ್ರಪ್ಪ ಗೌಡ್ರು, MB ಮಂಜುನಾಥ್, ಆರ್ ಟಿ ಗೋಪಾಲ್, ಸುಧೀರ್, ನಾಗರತ್ನ ದೇವರಾಜ್, ಸುರೇಶ್ ಸಿಂಗ್, ನಾಗಾರ್ಜುನ್ ಸ್ವಾಮಿ, ಸಂತೋಷ್ ಜೇನಿ, ಲೀಲಾ ಶಂಕರ್, ರೇಖಾ, ಸರಸ್ವತಿ ಗಣಪತಿ, ವೇದಾ, ಗೀತಾ, P ರಮೇಶ್ , ಎಂಎನ್ ಸುಧಾಕರ್, ಸುಂದರೇಶ್, ಪರಮೇಶ್, ಅರುಣ, ದಾನಮ್ಮ, ಲಕ್ಷ್ಮಿ, ವನಮಾಲ, ಮಂಜುಳಾ, ಮೊದಲಾದ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.