ಆಗುಂಬೆ ಪ್ರದೇಶವು ಸುಂದರ ಹಾಗೂ ಪ್ರವಾಸಿಗರ ತಾಣವಾಗಿದ್ದು ಆ ಬೆಟ್ಟವನ್ನು ವೀಕ್ಷಣೆ ಮಾಡಲು ತುಂಬಾ ಊರುಗಳಿಂದ ಜನರು ಬರುತ್ತಾರೆ
ಕುಂದಾದ್ರಿ ಬೆಟ್ಟದ ಮೇಲಿನ ಮೊದಲ ತಿರುವಿನಲ್ಲಿ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯ ದೇಹವೊಂದು ಪತ್ತೆಯಾಗಿರುವುದಾಗಿ ಕಂಡು ಬಂದಿದೆ.
ಸೋಮವಾರ ರಾತ್ರಿ ಟ್ರಕ್ಕಿಂಗ್ ಅಂತ ಬಂದಿದ್ದ ಹೋಗಿದ್ದ ತಂಡವೊಂದು ಸುಟ್ಟ ಸ್ಥಿತಿಯಲ್ಲಿ ಇದ್ದ ದೇಹವನ್ನು ನೋಡಿ ಪೊಲೀಸರಿಗೆ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಆಗುಂಬೆ ಪೊಲೀಸರು ತೆರಳಿ ಮಹಜರು ನಡೆಸಿದ್ದಾರೆ. ಇದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು ತನಿಖೆಯಲ್ಲಿ ವಿಚಾರಗಳು ಬಂದಮೇಲೆ ಸುಟ್ಟ ರೀತಿಯಲ್ಲಿದ್ದ ಶವ ಯಾರದೆಂದು ಗೊತ್ತಾಗುತ್ತದೆ.
ಕುಂದಾದ್ರಿ ಬೆಟ್ಟದ ವೀಕ್ಷಣೆಗೆ ಬಂದ ಜನರು ಆ ಬೆಟ್ಟದ ಮೇಲೆ ಅನೈತಿಕ ಚಟುವಟಿಕೆ, ಅಕ್ರಮ ವ್ಯವಹಾರ, ಇಸ್ಪೀಟು, ದಂಧೆ ಮುಂತಾದವು ನಡೆಯುತ್ತಿರುತ್ತದೆ ಎಂದು ಹಲವು ಬಾರಿ ಸ್ಥಳೀಯರಿಂದ ಕಂಪ್ಲೇಂಟ್ ಕೂಡ ಇತ್ತು ಹಾಗೂ ಮಾಧ್ಯಮಗಳಲ್ಲಿ ವರದಿ ಆಗಿತ್ತು ಆದರೆ ಇದೆಲ್ಲ ಹೊರತುಪಡಿಸಿ ಈಗ ಮನುಷ್ಯನ ಜೀವಕ್ಕೂ ಕುತ್ತು ಬರುತ್ತಿದೆ . ಇದೀಗ ದೇಹವನ್ನು ಸುಟ್ಟು ಹಾಕಲಾಗಿದ್ದು ಈ ಪ್ರಕರಣ ಮೂರರಿಂದ ನಾಲ್ಕು ದಿನಗಳ ಹಿಂದೆ ನಡೆದಿರಬಹುದು ಎಂದು ಹೇಳಲಾಗುತ್ತಿದೆ.
ಆಗುಂಬೆ ಪೊಲೀಸರಿಂದ ತನಿಖೆ ನಡೆಯುತ್ತಿದ್ದು ಇನ್ನಷ್ಟು ಮಾಹಿತಿ ಹೊರಬರಬೇಕಿದೆ.