ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ವರ್ಗಾವಣೆ.
ಕೆನರಾ ಬ್ಯಾಂಕ್ ರಿಪ್ಪನ್ ಪೇಟೆ ಮ್ಯಾನೇಜರ್ ಆಗಿರುವ ಶ್ರೀಯುತ ದೇವರಾಜ್ ಸರ್ ಅವರು, ಸತತವಾಗಿ ಮೂರು ವರ್ಷ ಎಂಟು ತಿಂಗಳು ಕಾರ್ಯವನ್ನು ನಿರ್ವಹಿಸಿ, ಇದೀಗ ಶಿವಮೊಗ್ಗಕ್ಕೆ ವರ್ಗಾವಣೆಯಾಗಿದ್ದಾರೆ. ನೆನ್ನೆ ನಡೆದ ಕಾರ್ಯಕ್ರಮದಲ್ಲಿ ಅವರಿಗೆ ಬಿಳ್ಕೊಡುಗೆ ಸಮಾರಂಭವನ್ನು ಹಮ್ಮಿಕೊಂಡಿದ್ದು,
ಈ ವೇಳೆ ಅವರು ತಮ್ಮ ಅನಿಸಿಕೆಗಳನ್ನು ಹೇಳಿಕೊಂಡಿದ್ದಾರೆ,,, ಇವರೊಂದಿಗೆ ಇನ್ನಿಬ್ಬರು ಸಿಬ್ಬಂದಿ ವರ್ಗದವರು ಕೂಡ ವರ್ಗಾವಣೆ ಹೊಂದಿದ್ದಾರೆ.
ಈ ಸಮಯದಲ್ಲಿ ಶ್ರೀಯುತ ದೇವರಾಜ್ ಸರ್, ತಮ್ಮ ಅನಿಸಿಕೆಗಳ ಮೂಲಕ ಈ ರಿಪ್ಪನ್ ಪೇಟೆಗೆ ಮೊದಲ ದಿನ ಬಂದಾಗ ತುಂಬಾ ತೊಡಕುಗಳಿದ್ದು, ಕಷ್ಟವೆನಿಸಿದರು ಕೂಡ ಯಾವ ಗ್ರಾಹಕರನ್ನು ನೋಯಿಸದೆ ಕೂರಿಸಿ ಮಾತನಾಡಿಸಿದ್ದೇನೆ ಎಂದು ತಿಳಿಸಿದರು ಹಾಗೂ ಇವರ ಬಂದ ನಂತರ ಸಾಕಷ್ಟು ಜನರಿಗೆ ಸಾಲ ಸೌಲಭ್ಯವನ್ನು ಧರಿಸಿಕೊಟ್ಟಿದ್ದಾರೆ.
ಬೆಳೆ ಸಲ, ಮುದ್ರಾ ಲೋನ್, ಹೌಸಿಂಗ್ ಲೋನ್, ಪರ್ಸನಲ್ ಲೋನ್ ಹಾಗೂ ಗೋಲ್ಡ್ ಲೋನ್ ಹಳ್ಳಿಯವರಿಗೆ ತುಂಬಾ ಸಹಕರವಾಗುವಂತೆ ಕೆಲವು ಸ್ಕೀಮ್ ಗಳನ್ನು ಮಾಡಿಕೊಟ್ಟಿದ್ದಾರೆ ಹಾಗೆ fd ಗಳನ್ನು ಕೂಡ ಈಡಿಸಿದ್ದಾರೆ ಸ್ಕಾಲರ್ಶಿಪ್ಗಳನ್ನು ಕೂಡ ಸ್ಟುಡೆಂಟಿಗೆ ಮಾಡಿಸಿಕೊಟ್ಟಿದ್ದಾರೆ,,, ಹೀಗೆ ಸಾಕಷ್ಟು ತಮ್ಮ ಸೇವೆಯಲ್ಲಿ ತೊಡಗಿಸಿಕೊಂಡು ತಾವು ಬಂದಾಗ ಇದ್ದ ಬಿಸಿನೆಸ್ ಇವಾಗ ಅದು ನಾಲ್ಕು ಪಟ್ಟು ಜಾಸ್ತಿ ಹೋಗಿದೆ ಎಂದಿದ್ದಾರೆ.
ಇದೇ ವೇಳೆ ಅವರ ಸಿಬ್ಬಂದಿ ವರ್ಗದವರಿಗೂ ಕೂಡ ಅವರು ನಾವು ಒಂದು ಕುಟುಂಬವಿದ್ದಂತೆ ಎಂದು ತಿಳಿಸಿದರು… ಹೀಗೆ ತಮ್ಮ ವಿಚಾರಗಳನ್ನು ಅವರು ನಿನ್ನೆ ನಡೆದ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ…
ಇನ್ನು ಅಲ್ಲಿನ ಸಿಬ್ಬಂದಿ ವರ್ಗದವರು ಕೂಡ ಮ್ಯಾನೇಜರ್ ಬಗ್ಗೆ ಮಾತಾಡಿ ಒಳ್ಳೆ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ… ಸಾಕಷ್ಟು ಜನ ಗ್ರಾಹಕರು ಸೇರಿದ್ದು ಅವರು ಕೂಡ ತಮ್ಮ ಅನಿಸಿಕೆಗಳನ್ನು ತಿಳಿಸಿದ್ದಾರೆ…
ಎಲ್ಲ ಗ್ರಾಹಕರು ಕೂಡ ಅವರಿಗೆ ತಮ್ಮ ಮುಂದಿನ ದಿನಗಳು ಇನ್ನು ಉತ್ತಮವಾಗಿರಲಿ ಎಂದು ಹಾರೈಸಿದ್ದಾರೆ…