ಆರ್ಸಿಬಿ ಕ್ರಿಕೆಟ್ ಗೆಲುವು ಸಂಭ್ರಮ ಆಚರಣೆಯನ್ನು ಮಾಡಲು ಬೆಂಗಳೂರಿಗೆ ಬಂದಂತಹ ಕ್ರೀಡಾಪಟುಗಳು ಸಂಭ್ರಮದಿಂದ ಕಾರ್ಯಕ್ರಮವನ್ನು ಕೈಗೊಂಡು, ಜನಸಾಗರವೇ ಹರಿದು ಬಂದಿತ್ತು, ಹಾಗಾದರೆ ಆ ಕಾರ್ಯಕ್ರಮಕ್ಕೆ ಪೂರ್ವ ಸಿದ್ಧತೆಗಳನ್ನು ಕ್ರೀಡಾಂಗಣದಲ್ಲಿ ಮಾಡಿಕೊಂಡಿರಲಿಲ್ಲವೇ ಇದು ಪ್ರತಿಯೊಂದು ಜನರನ್ನು ಕಾಡುತ್ತಿರುವ ಪ್ರಶ್ನೆ,,,
ಯಾವುದೇ ಒಂದು ಕಾರ್ಯಕ್ರಮವನ್ನು ಕೈಗೊಳ್ಳುವುದಕ್ಕಿಂತ ಮುಂಚೆ ಅದರದೇ ಆಗಿರುವಂತಹ ಆಗುಹೋಗುವಗಳ ಬಗ್ಗೆ ಸಿದ್ಧತೆಗಳನ್ನು ಮಾಡಿಕೊಂಡಿರಲಾಗುತ್ತದೆ ಹಾಗಾದ್ರೆ ಇವತ್ತಿಗೆ ಸತ್ತವರ ಸಂಖ್ಯೆ ಎಷ್ಟು? ಗಾಯಗೊಂಡವರ ಸಂಖ್ಯೆ ಎಷ್ಟು? ಸತ್ತವರಿಗೆ ಈಗಾಗಲೇ ಸರ್ಕಾರ ಅವರಿಗೆ ಸಹಾಯಧನ ನೀಡುವಂತೆ ಘೋಷಣೆ ಮಾಡಿದೆ ಹಾಗಾದ್ರೆ ಅವರವರ ಮನೆಯ ಪರಿಸ್ಥಿತಿಗಳೇ ಏನಾಗಬೇಕು?
ಇಲ್ಲಿ ಜನರು ಕೂಡ ತಿಳಿದುಕೊಳ್ಳಬೇಕಾದಂತಹ ವಿಚಾರ ಹೋಗಿ ಕಾರ್ಯಕ್ರಮವನ್ನು ವೀಕ್ಷಣೆ ಮಾಡುವುದಕ್ಕಿಂತ ಮೊದಲು ಮನೆಯಲ್ಲಿಯೇ ಅರಮಾಗಿ ಕುಳಿತುಕೊಂಡು ಮಾಡಿದರೆ ಇಷ್ಟು ಸಾವುಗಳಾಗುತ್ತಿರಲಿಲ್ಲ..
- ಒಂದು ಕಡೆ ಆರ್ಸಿಬಿ ಗೆಲುವು ಹಬ್ಬ ಆಚರಣೆಯಾದರೆ ಇನ್ನೊಂದು ಕಡೆ ಮೌನಾಚರಣೆಯಾಗಿದೆ ಇದೀಗ ದೇಶದ ಎಲ್ಲಾ ಕಡೆ ಈ ವಿಚಾರಗಳು ತುಂಬಾ ಚರ್ಚೆಯಲ್ಲಿದ್ದು ಮುಂದುವರೆದ ಭಾಗವನ್ನು ನಾವು ನೋಡಬೇಕಾಗಿದೆ.