ತೀರ್ಥಹಳ್ಳಿ ತಾಲೂಕಿನ ಶ್ರೀ ಕ್ಷೇತ್ರ ಅಲಸೇ ಅಮ್ಮನವರ ದೇವಸ್ಥಾನಕ್ಕೆ ಸರಕಾರಿ ಬಸ್ ಬಿಡಲಾಗಿದೆ

ಶ್ರೀ ಕ್ಷೇತ್ರ ತೀರ್ಥಳ್ಳಿ ತಾಲೂಕಿನ ಅಲಸೆ ಅಮ್ಮನವರ ದೇವಸ್ಥಾನಕ್ಕೆ ಸರ್ಕಾರದಿಂದ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಈ ದೇವಸ್ಥಾನಕ್ಕೆ ಸುಮಾರು ವರ್ಷಗಳ ಇತಿಹಾಸವಿದ್ದು ಪುಣ್ಯಕ್ಷೇತ್ರವೆಂದೆನಿಸಿಕೊಂಡಿದ್ದ ಸಾವಿರಾರು ಭಕ್ತರು ಇಲ್ಲಿಗೆ ಬರಲು ಬಲು ಕಷ್ಟಕರವಾಗಿ ಬರುತ್ತಿದ್ದರು. ಸುತ್ತಮುತ್ತಲು ಸಾಕಷ್ಟು ಹಳ್ಳಿಯಿಂದ ತುಂಬಿದ ಈ ಪ್ರದೇಶವು ಒಂದು ಸುಂದರವಾದ ಕ್ಷೇತ್ರವಾಗಿದೆ.

ಈ ಪ್ರದೇಶವು ಮಳೆಗಾಲದಲ್ಲಿ ಅತಿ ಹೆಚ್ಚು ಮಳೆಯಿಂದ ತುಂಬಿದ್ದು ಇಲ್ಲಿನ ಭಕ್ತಾದಿಗಳಿಗೆ ಓಡಾಡಲು ವಾಹನಗಳ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಜನರು ಪರದಾಡುವಂತಹ ಸಂಕಷ್ಟದಲ್ಲಿ ಇರುತ್ತಿದ್ದರು ಇದನ್ನು ಗಮನಿಸಿದ ಊರಿನ ಜನರು ಹಾಗೂ ಭಕ್ತರೊಂಧದವರು ದೇವಸ್ಥಾನದ ಕಮಿಟಿ ವರ್ಗದವರು ಎಲ್ಲರೂ ಸೇರಿ ಒಂದು ಬಸ್ಸಿನ ವ್ಯವಸ್ಥೆ ಮಾಡಬೇಕೆಂದು ಈ ಹಿಂದೆನೇ ಸರ್ಕಾರದ ಗಮನಕ್ಕೆ ತಂದಿದ್ದರು.

ಈ ಒಂದು ಪುಣ್ಯಕ್ಷೇತ್ರಕ್ಕೆ ಇದೀಗ ಸರ್ಕಾರದ ಬಸ್ಸಿನ ವ್ಯವಸ್ಥೆಯನ್ನು ಮಾಡಲಾಗಿದೆ ಈ ಕೆಳಗಂಡಂತೆ ಬಸ್ಸಿನ ಸಮಯವನ್ನು ವಿವರಿಸಲಾಗಿದೆ.

ಈ  ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಿ ಕೊಟ್ಟಂತಹ ತೀರ್ಥಹಳ್ಳಿ ತಾಲೂಕಿನ ಶ್ರೀಯುತ ಆರ್ಗ ಜ್ಞಾನೇಂದ್ರ ಶಾಸಕರು, ಹಾಗೂ ಸಾಗರ ಮತ್ತು ಹೊಸನಗರ ಕ್ಷೇತ್ರದ ಶಾಸಕರಾದ ಹಾಗೂ ಕೈಗಾರಿಕಾ ನಿಯಮ ಮಂಡಳಿ ಅಧ್ಯಕ್ಷರು ಆಗಿರುವಂತಹ ಶ್ರೀಯುತ ಬೇಲೂರು ಗೋಪಾಲಕೃಷ್ಣ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀಯುತ ಮಧು ಬಂಗಾರಪ್ಪ  ಇವರಿಗೆ ದೇವಸ್ಥಾನದ ಕಮಿಟಿಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು  ಹಾಗೂ ಊರಿನ ಎಲ್ಲಾ  ಹಿರಿಯ ಗ್ರಾಮಸ್ಥರು  ನಾಗರಿಕರು ಹಾಗೂ ಭಕ್ತಾದಿ ವೃಂದದವರು ಅಭಿನಂದನೆ ಸಲ್ಲಿಸಿದರು.

✍️ Dr. ಶ್ವೇತಾ ಜಿ ಎನ್ ಆಚಾರ್ಯ

 

Oplus_0

ಈ ಒಂದು ಕ್ಷೇತ್ರಕ್ಕೆ ರಸ್ತೆ ವ್ಯವಸ್ಥೆಯು ಅವಶ್ಯಕತೆ ಇರುವುದರಿಂದ ಅದನ್ನು ಕೂಡ ಮುಂದಿನ ದಿನಗಳಲ್ಲಿ ಸರ್ಕಾರದಿಂದ ಮಾಡಿಕೊಟ್ಟರೆ ಸುತ್ತಮುತ್ತಲಿನ ಜನಕ್ಕೆ ದೇವಸ್ಥಾನಕ್ಕೆ ಆಗಮಿಸಲು ಸಹಾಯವಾಗುತ್ತದೆ

 

 

 

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

     ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ , ಹೊಸನಗರ ತಾಲೂಕು. ಇವರ ಆಶ್ರಯದಲ್ಲಿ ತೃತೀಯ ವರ್ಷದ ಹೊನಲು ಬೆಳಕಿನ ವಾಲಿಬಾಲ್ ವಾಲಿಬಾಲ್ ಪಂದ್ಯಾವಳಿಯನ್ನು  3 ಜನವರಿ 2026 ತಳಲೆ ಗ್ರಾಮದಲ್ಲಿ ನಡೆಸಲಾಗುತ್ತಿದೆ. ವಾಲಿಬಾಲ್ ಪಂದ್ಯಾವಳಿಯ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀ ಶ್ರೇಯಸ್…

    Continue reading
    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಬೃಹತ್ ಪ್ರತಿಭಟನೆ  ಜಾಗರಣಾ ವೇದಿಕೆ, ವಿನಾಯಕ ಪೇಟೆ  ( ರಿಪ್ಪನ್ ಪೇಟೆ)  ಬಾಂಗ್ಲಾದೇಶದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂದುಗಳ ನರಮೇದವನ್ನು ಖಂಡಿಸಿ ಹಾಗೂ ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗಾಗಿ ಹಿಂದೂ ಜಾಗರಣ ವೇದಿಕೆ ರಿಪ್ಪನ್ ಪೇಟೆ ಇವರು ಹಿಂದುಗಳ ರಕ್ಷಣೆಗೆ ಆಗ್ರಹಿಸಿ…

    Continue reading

    You Missed

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಶ್ರೀ ದುರ್ಗಾಪರಮೇಶ್ವರಿ ವಾಲಿಬಾಲ್ ಕ್ಲಬ್ ತಳಲೆ

    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಹಿಂದೂ ಜಾಗರಣಾ ವೇದಿಕೆ, ವಿನಾಯಕ ಪೇಟೆ ( ರಿಪ್ಪನ್ ಪೇಟೆ ) ಬೃಹತ್ ಪ್ರತಿಭಟನೆ

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ಬೆಳ್ಳಂ ಬೆಳಗೆ ರಿಪ್ಪನ್ ಪೇಟೆಯಲ್ಲಿ  ದನವನ್ನು ಭೀಕರವಾಗಿ ಎಳೆದುಕೊಂಡು ಹೋದ ದುಷ್ಟರು

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ರಿಪ್ಪನ್ ಪೇಟೆಯ ಕಾವ್ಯಗೆ ಕಾರ್ಮಿಕರಿಂದ ಸನ್ಮಾನ

    ವಿನಾಯಕ ಪೇಟೆ (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ವಿನಾಯಕ ಪೇಟೆ  (ರಿಪ್ಪನ್ ಪೇಟೆ ) ವಿನಾಯಕ ದೇವಸ್ಥಾನದಲ್ಲಿ ಗೋಪೂಜೆ ಮಾಡಲಾಯಿತು.

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ

    ಹೊಸನಗರದಲ್ಲಿ ಕಾಂಗ್ರೆಸ್ ವಿರುದ್ಧ ಬಿಜೆಪಿ ಆಕ್ರೋಶ