ಶಾಲೆಗೆ ಹೋಗುವಂತ ಮಕ್ಕಳಿಗೆ ಗುಡ್ ನ್ಯೂಸ್.!
ಕರ್ನಾಟಕ ರಾಜ್ಯದ ಸರ್ಕಾರವು ಮತ್ತೊಂದು ದೊಡ್ಡ ಯೋಜನೆಯನ್ನು ತಂದಿದೆ. ಇದೇ ನಿಟ್ಟಿನಲ್ಲಿ ಶಾಲಾ ಮಕ್ಕಳ ಆರೋಗ್ಯದ ಉನ್ನತಿಗಾಗಿ ಈಗಾಗಲೇ ನಡೆಯುತ್ತಿರುವ ಮಧ್ಯಾಹ್ನ ಊಟದ ಯೋಜನೆಯ ವ್ಯಾಪ್ತಿಯನ್ನು ವಿಸ್ತರಿಸಿ ಎಲ್ಕೆಜಿ ( ಹಿರಿಯ ಬಲವಾಡಿ ) ತರಗತಿ ಮಕ್ಕಳಿಗೂ ಪೌಷ್ಟಿಕ ಆಹಾರದ ರೂಪದಲ್ಲಿ ಮೊಟ್ಟೆ ಮತ್ತು ಬಾಳೆಹಣ್ಣು ವಿತರಣೆ ಮಾಡಲು ಸರ್ಕಾರವು ಯೋಜನೆಯನ್ನು ಕೈಗೊಂಡಿದೆ
2025 – 26 ನೇ ಸಾಲಿನಲ್ಲಿ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಹಕಾರದಿಂದ ಇಂದಿನಿಂದಲೇ ಜಾರಿಗೆ ಬರಲಿದೆ
ಯೋಜನೆಯ ಹಿನ್ನೆಲೆ
2025 – 26ನೇ ಸಾಲಿನ ರಾಜ್ಯದ ಬಜೆಟ್ ಭಾಷಣದ ಕಂಡಿಕೆ 106 ರಲ್ಲಿ ಈ ಬಗ್ಗೆ ಘೋಷಣೆ ಮಾಡಲಾಗಿದೆ. ಈ ಯೋಜನೆಯ ಉದ್ದೇಶ ಶಾಲಾ ಮಕ್ಕಳಿಗೆ ಪೌಷ್ಠಿಕತೆ ಕೊರತೆಯನ್ನು ಪರಿಹರಿಸುವುದು ಹಾಗೂ ಆರೋಗ್ಯವಂತ ಮತ್ತು ಬುದ್ಧಿವಂತರನ್ನಾಗಿ ಮಾಡಲು ಉದ್ದೇಶವನ್ನು ಕೈಗೊಂಡಿದೆ.
ಈಗಾಗಲೇ ರಾಜ್ಯದಲ್ಲಿ 53 ಲಕ್ಷಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಮಧ್ಯಾಹ್ನದ ಉಪಹಾರ ಯೋಜನೆಯ ಪೌಷ್ಟಿಕ ಆಹಾರ ಪಡೆಯುತ್ತಿದ್ದಾರೆ. ಮೊಟ್ಟೆ ಅಥವಾ ಬಾಳೆಹಣ್ಣು ವಾರಕ್ಕೆ ಎರಡು ದಿನ ನೀಡಲಾಗುತ್ತದೆ.