ಹಾರನಹಳ್ಳಿಯ ಗಣಪತಿ ವಿಗ್ರಹ ಕಲಾವಿದ ಶಿವಾನಂದಪ್ಪ ಅವರು ವಿಧಿವಶರಾದರು. ಅವರು ಸುಮಾರು 58 ವರ್ಷಗಳಿಂದ ರಿಪ್ಪನ್ ಪೇಟೆಯಲ್ಲಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗಣಪತಿ ಮೂರ್ತಿಗಳನ್ನು ಸುಂದರವಾಗಿ ತಯಾರಿಸಿ ಪ್ರಸಿದ್ಧರಾಗಿದ್ದರು. ತಮ್ಮ ವಿಶಿಷ್ಟ ಕಲೆ ಮತ್ತು ನಿಪುಣತೆಯಿಂದ ಜನಮನ ಗೆದ್ದಿದ್ದರು.
ಇವರು ವಿದ್ಯಾನಗರದಲ್ಲಿ ವಾಸವಾಗಿದ್ದು, ದುರ್ಗಾಂಬಿಕಾ ಕೃಪಾ ಸಾ ಮಿಲ್ ಆವರಣದಲ್ಲಿ ಮೂರ್ತಿಗಳನ್ನು ತಯಾರಿಸುತ್ತಿದ್ದರು. ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ 12 ಗಂಟೆಗೆ ಸಂಕೇದೇವನಕೊಪ್ಪದಲ್ಲಿ ನಡೆಯಲಿದೆ.
ಶಿವಾನಂದಪ್ಪ ಅವರ ಅಗಲಿಕೆಗೆ ಶ್ರೀನಿವಾಸ್ ಆಚಾರ್ ಸೇರಿದಂತೆ ವಿಶ್ವಕರ್ಮ ಸಮಾಜ ಮತ್ತು ಗ್ರಾಮಸ್ಥರು ಸಂತಾಪ ವ್ಯಕ್ತಪಡಿಸಿದ್ದಾರೆ.






