ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

ಆನಂದಪುರ, ಜು.13: ಅಕ್ರಮ ಚಟುವಟಿಕೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಮುಂದುವರಿಸಿರುವ ಆನಂದಪುರ ಪೊಲೀಸ್ ಠಾಣೆಯ ಪಿಎಸ್ಐ ಪ್ರವೀಣ್ ನೇತೃತ್ವದ ತಂಡ, ಕಾಡಿನ ಮಧ್ಯೆ ನಡೆಯುತ್ತಿದ್ದ ಅಕ್ರಮ ತೂರಬಿಲ್ಲೆ ಜೂಜಾಟದ ಮೇಲೆ ದಿಢೀರ್ ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದೆ.

ಜುಲೈ 12ರಂದು ಮಧ್ಯಾಹ್ನ, ಸಾಗರ ತಾಲೂಕಿನ ಆನಂದಪುರ ಸಮೀಪದ ಮುಂಬಾಳಿನ ಅರಣ್ಯ ಇಲಾಖೆಗೆ ಸೇರಿದ ಪ್ರದೇಶದಲ್ಲಿ ಯಾವುದೇ ಅನುಮತಿಯಿಲ್ಲದೆ ಜೂಜಾಟ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಮಾಹಿತಿ ಆಧರಿಸಿ ಪಿಎಸ್ಐ ಪ್ರವೀಣ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದಾಗ, ಸ್ಥಳದಲ್ಲಿದ್ದ ಕೆಲವರು ಪರಾರಿಯಾಗಿದ್ದು, ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಬಂಧಿತರಿಂದ ಜೂಜಾಟಕ್ಕೆ ಬಳಸಲಾಗುತ್ತಿದ್ದ ₹4,200 ನಗದು ಹಾಗೂ ₹1 ಮುಖಬೆಲೆಯ ಎರಡು ನಾಣ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಸಂತೋಷ್ (ಆನಂದ ಪುತ್ರ), ಶಿವು (ನಾಗರಾಜ ಪುತ್ರ) ಹಾಗೂ ಶಾಬಾಷ್ (ಭಾಷಾಸಾಬ್ ಪುತ್ರ) ಎಂದು ಗುರುತಿಸಲಾಗಿದೆ.

ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ಆರೋಪಿಗಳ ಬಂಧನಕ್ಕಾಗಿ ಪಿಎಸ್ಐ ಪ್ರವೀಣ್ ನೇತೃತ್ವದಲ್ಲಿ ತನಿಖೆ ಮುಂದುವರಿದಿದೆ.

  • PublicTimes Karnataka

    ಪಬ್ಲಿಕ್ ಟೈಮ್ ಕರ್ನಾಟಕ ನೈಜ ನೇರ ಸುದ್ದಿಗಾಗಿ *ಪ್ರಸ್ತುತ ರಾಜಕೀಯ *ಸಾಮಾಜಿಕ ಹೋರಾಟ * ಕಾನೂನು ನೆರವು * ಕ್ರೀಡೆ * ಕ್ರೈಂ * ಸರ್ಕಾರದ ಅನುದಾನದ ಬಗ್ಗೆ ಮಾಹಿತಿ ಕರ್ನಾಟಕದ ಯಾವುದೇ ಮೂಲೆಯಲ್ಲಿ ನಡೆಯುವಂತಹ ವಿಚಾರಗಳ ಬಗ್ಗೆ ಸಮಗ್ರ ಮಾಹಿತಿ ನಿಮ್ಮ ಮುಂದಿಡುತ್ತೇವೆ. ನಿಷ್ಪಕ್ಷಪಾತ ಮಾಡದೆ ನೇರ ಮತ್ತು ನೈಜ ಸುದ್ದಿಗಳನ್ನು ನಿಮ್ಮ ಮುಂದಿಡುತ್ತೇವೆ

    Related Posts

    ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ:-

    ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ ರಿಪ್ಪನ್‌ಪೇಟೆ: ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ಶೆಟ್ಟಿಬೀಡು ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಾಲ್ಕು ಬಾರಿ ಪಲ್ಟಿಯಾದ ಪರಿಣಾಮ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕುಸುಗುಂಡಿ…

    Continue reading
    ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸವಯವ ಕೃಷಿ ಹಾಗೂ ಅಡಿಕೆ ರೋಗ ನಿಯಂತ್ರಣ ಕಾರ್ಯಾಗಾರ:-

    ಭಾರತೀಯ ಜನತಾ ಪಕ್ಷ, ಹೊಸನಗರ ಮಂಡಲ ಬಿಜೆಪಿ ರೈತ ಮೋರ್ಚಾ ವತಿಯಿಂದ ಸವಯವ ಕೃಷಿ ಹಾಗೂ ಅಡಿಕೆ ಬೆಳೆ ಎಲೆಚುಕ್ಕಿ–ಕೊಳೆರೋಗ ನಿಯಂತ್ರಣ ಕುರಿತು ಯಶಸ್ವಿ ರೈತ ಕಾರ್ಯಾಗಾರ. Bharatiya Janata Party, Hosanagara mandali BJP Kisan Morcha Organizes Successful…

    Continue reading

    You Missed

    ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ:-

    ರಿಪ್ಪನ್‌ಪೇಟೆ ಸಮೀಪ ಕಾರು ನಾಲ್ಕು ಬಾರಿ ಪಲ್ಟಿ: ಮೂವರಿಗೆ ಗಂಭೀರ ಗಾಯ:-

    ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

    ಕಾಡಿನಲ್ಲೇ ಅಕ್ರಮ ತೂರಬಿಲ್ಲೆ ಜೂಜಾಟಕ್ಕೆ ಪೊಲೀಸರ ಬ್ರೇಕ್: ಮೂವರು ಬಂಧನ

    ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸವಯವ ಕೃಷಿ ಹಾಗೂ ಅಡಿಕೆ ರೋಗ ನಿಯಂತ್ರಣ ಕಾರ್ಯಾಗಾರ:-

    ಹೊಸನಗರದಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಸವಯವ ಕೃಷಿ ಹಾಗೂ ಅಡಿಕೆ ರೋಗ ನಿಯಂತ್ರಣ ಕಾರ್ಯಾಗಾರ:-

    ಹೊಸನಗರ ಪಟಗುಪ್ಪ : ಸೇತುವೆ ಬಳಿ ಗೋವು ಹತ್ಯಪ್ರಕರಣ

    ಹೊಸನಗರ ಪಟಗುಪ್ಪ : ಸೇತುವೆ ಬಳಿ ಗೋವು ಹತ್ಯಪ್ರಕರಣ

    ಹಸಿದವರಿಗೆ ಅನ್ನದಾನ ಕಾರ್ಯಕ್ರಮ : ಶಿವಮೊಗ್ಗ

    ಹಸಿದವರಿಗೆ ಅನ್ನದಾನ ಕಾರ್ಯಕ್ರಮ : ಶಿವಮೊಗ್ಗ

    ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ

    ಆಶ್ರಯ ನಿವೇಶನ ಭೂಮಿ ಒತ್ತುವರಿ ತೆರವಿಗೆ ಆಗ್ರಹ: ಸೌಲಭ್ಯ ಕಲ್ಪಿಸಲು ಮನವಿ